ಜಗನ್ನಾಥ ಶಂಕಂ ಇನ್ನಿಲ್ಲ
ಜಗನ್ನಾಥ ಶಂಕಂ ಇನ್ನಿಲ್ಲ
🪔 ಕನ್ನಡ ಕಲಿಯ ಹಣತೆಯೊಂದು ಆರಿ ಹೋಯ್ತು 🙏
*** ವಿಶ್ವೇಶ್ವರ ದೀಕ್ಷಿತ
*** ವಿಶ್ವೇಶ್ವರ ದೀಕ್ಷಿತ
ದಕ್ಷಿಣ ಕ್ಯಲಿಫೋರ್ನಿಯ ಕರ್ನಾಟಕ ಸಾಂಸ್ಕೃತಿಕ ಸಂಘದ ಕರ್ನಾಟಕ ಸುವರ್ಣ ರಾಜ್ಯೋತ್ಸವ ಸಂಭ್ರಮದಲ್ಲಿ ಮಾಡಿದ ಭಾಷಣ
*** ವಿಶ್ವೇಶ್ವರ ದೀಕ್ಷಿತ
ಭಾಷೆ ಅಂದರೇನು? ಮಾತಾಡುವುದೊ? ಬರೆಯುವುದೊ? ನುಡಿಯೊ? ಲಿಪಿಯೊ? ಪದ ವಾಕ್ಯಗಳೋ? ಅರ್ಥವೋ? ಇವಾವೂ ಅಲ್ಲದ ಅಮೂರ್ತ ಸಂವಹನವೋ?
ಇಬ್ಬರ ನಡುವೆ ಭಾಷೆ ಬೇಕು. ಗಣಿತ, ವಿಜ್ಞಾನ, ಕಲೆ – ಯಾವುದಕ್ಕೂ ಭಾಷೆ ಬೇಕು. ಆಲೋಚಿಸಲೂ ಭಾಷೆ ಬೇಕು! ಅಂತೂ ಇದು ಮನುಷ್ಯನ ಬದುಕಿಗೆ, ಬಾಳಿಗೆ, ಉನ್ನತಿಗೆ ಅವಶ್ಯವಾದದ್ದು. ಹಾಗಾದರೆ ಭಾಷೆಯನ್ನು ಕಲಿಯುವುದು ಹೇಗೆ? ಒಂದು ಭಾಷೆಯನ್ನು ಕಲಿಯಲು ಮಾಧ್ಯಮವಾಗಿ ಇನ್ನೊಂದು ಭಾಷೆ ಅಗತ್ಯವೆ? ಸೂಕ್ತವಾದ ಮಾಧ್ಯಮ ಭಾಷೆ ಯಾವುದು?
[ಈ ಬಿತ್ತರಿಕೆಯಲ್ಲಿ ಕನ್ನಡ ಮತ್ತು ವಿಜ್ಞಾನ, ವಿಜ್ಞಾನ ಬರವಣಿಗೆ, ಕನ್ನಡದಲ್ಲಿ ವಿಜ್ಞಾನ ಬರೆಹದ ಸ್ಥಿತಿ ಈ ಅಂಶಗಳಣ್ನು ನಿಮ್ಮ ಗಮನಕ್ಕೆ ತಂದು, ವಿಜ್ಞಾನ ಕಲಿಕೆಗೆ ಕೆಲವು ಸೂಚನೆಗಳನ್ನು ನೀಡಲು ಪ್ರಯತ್ನಿಸಿದ್ದೇನೆ. ಎಂದಿನಂತೆ, ನಿಮ್ಮ ಕಮೆಂಟು, ಪ್ರಶ್ನೆ, ನಿರ್ಭಿಡೆಯ ಟೀಕೆಗಳಿಗೆ ಸ್ವಾಗತ.]
ನರ್ತನ: ಮಾಲತಿ ಅಯ್ಯಂಗಾರ್
ಮತ್ತು ಕಲಾವಿದರು;
ಗಾಯನ: ಕಲಾನಿಧಿ ವಿದ್ವಾನ್
ಶ್ರೀ ಆರ್.ಕೆ. ಶ್ರೀಕಂಠನ್;
ಪೂರ್ಣ ವಾಚನ
ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ
ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ? ಕಿಟ್ಟೆಲ್ ಕೋಶದಲ್ಲಿ ೧೨ನೆ ಶತಮಾನದ ಶಬ್ದಮಣಿದರ್ಪಣ ಮತ್ತು ಬಸವಪುರಾಣಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಕವಿರಾಜ ಮಾರ್ಗ, ಪಂಪ, ಮತ್ತು ರನ್ನರಲ್ಲಿ ಈ ಪದಗಳ ಪ್ರಯೋಗ ನನಗೆ ಕಾಣಲಿಲ್ಲ. ಇದಕ್ಕೆ ಏನಾದರೂ ಸುಲಭ ವಿವರಣೆ ಇದ್ದರೆ ನನಗೆ ಹೊಳೆಯುತ್ತಿಲ್ಲ.
ಯುಗಾದಿಯಿಂದ ಉಗಾದಿ ಬಂತೆ? ಉಗಾದಿಗೆ ಒಂದು ಸ್ವತಂತ್ರ ಹುಟ್ಟು ಇದೆಯೆ? ಭಾಷೆ ಬೆಳೆಯುವುದದಾದರೂ ಹೇಗೆ?
... ಸಾಯಂಕಾಲದ ಮಳೆ ಕಾಯ್ದ ರಸ್ತೆಯ ಮೇಲೆ ರಪರಪನೆ ಬಿದ್ದಾಗ, ಹೆಬೆ ಎದ್ದು, ದೂಳಿನ ಕಂಪನ್ನು ಮೂಗು ಹಿಗ್ಗಿಸುತ್ತ ಸವಿಯಲು ಕಾಯದವರು ಯಾರಿದ್ದಾರೆ! ಆ ದಿನದ ಆಗಮನವನ್ನು ಸಾರುವುದೇ ಉಗಾದಿ!
ಸಂಸ್ಕೃತ ಚಮತ್ಕಾವ್ಯ ಪರಂಪರೆಯ ಒಂದು ಇಣುಕು ನೋಟ; ಮತ್ತು ನನ್ನ ಪವಿತ್ರ ಪ್ರೇಮ ಕವನ ಮತ್ತು ಆ ದುಸ್ಸಾಹಸದ ಹಿಂದಿನ ಕತೆ.
ನನ್ನ ಮಗನಿಗೆ ೫ ವರುಷವಾಗಿದ್ದಾಗ ಒಂದು ಆಟಿಕೆಗಾಗಿ ಬೇಡಿಕೆಯಿಟ್ಟ. ಅದನ್ನು ನಾವು ಕೊಡಿಸಿದೆವು. ಮಾರನೇ ದಿನವಷ್ಟೇ ಅದೇ ಸರಣಿಯಲ್ಲಿಯ ಇನ್ನೊಂದು ಬೊಂಬೆ ಬೇಕೆಂದು ಹಠ ಶುರುವಾಯಿತು. ವಿಷಯ ಮರೆಸುವ ನನ್ನ ಯಾವುದೇ ಮಾಮೂಲಿನ ತಂತ್ರಗಳು ನಿಷ್ಪ್ರಯೋಜಕವಾಗಿ ಸಣ್ಣ ಅಳುಕ ಮುಂದುವರೆಯಿತು.
ಎಲ್ಲ ಆಸೆಗಳನ್ನು ಪೂರೈಸಬೇಕೇ? ಪೂರೈಸಿದಂತೆ ಆಸೆಯ ಬಳ್ಳಿ ಬೆಳೆಯುತ್ತಲೇ ಹೋಗುತ್ತದೆಯೇ? ಯಾರಿಗೆ ದುಃಖ? ಯಾರಿಗೆ ಕೋಪ? ಯಾರಿಗೆ ಮರುಕ? ಮಗುವಿನ ಮನಸ್ಸನ್ನು ನೋಯಿಸದೆ, ವಾದ-ಪ್ರತಿವಾದಗಳಿಗೆ ಎಡೆ ಕೊಡದೆ, ಜೀವನದ ಪಾಠಗಳನ್ನು ಕಲಿಸುವುದು ಹೇಗೆ? "ಸುಳ್ಳು" ತಂದೆ-ತಾಯಿಗಳಿಗೆ ಸಮರ್ಥ ಅಸ್ತ್ರವಾದಿತೇ? ಇಂದಿನ "ಬಿಳಿ ಸುಳ್ಳು" ನಾಳೆ ಬೆಳೆದು ಮುಳ್ಳು ಆದೀತೆ? ಈ ಪ್ರಶ್ನೆಗಳ ಮೇಲೆ ಅನುಭವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಶೃತಿ ಅರವಿಂದ್.
"ಎಲ್ಲರ ಜೀವನದಲ್ಲೂ ಕೆಲವು ಏರುಪೇರುಗಳಾಗುತ್ತವೆ. ನೀವೇನು ತಿಳಿಯದವರಲ್ಲ. ಕೊನೆತನಕ ಹೋರಾಡುತ್ತೇನೆ ಎನ್ನುವವ ಮಾತ್ರ ಸೈನಿಕ. ನಾನು ಗೆಲ್ಲತ್ತೇನೆ ಎನ್ನುವುದು ಬಿಟ್ಟು ಬೇರೇನನ್ನೂ ಚಿಂತಿಸದೆ ಇರುವುದಕ್ಕೆ ಆತನಿಗೆ ಮಾತ್ರ ಸಾಧ್ಯ. ನೀವು ಗೆಲ್ಲುತ್ತೀರಿ. "
ಹೋರಾಟವಾದರೂ ಯಾರೊಡನೆ? ಸೇನಾನಿ ಗುರು ಸಾರ್ ಗೆಲ್ಲುತ್ತಾರಾ? ಗೆದ್ದರಾ?
ಮಾನವೀಯ ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ನವಿರಾಗಿ ಕತೆ ಹೆಣೆದಿದ್ದಾರೆ ಗೋಪೀನಾಥ ರಾವ್.ಮುಂದೆ ಓದಿ.
ಕನ್ನಡದಲ್ಲಿ ಬಾವುಟ ಅಂದರೆ ಧ್ವಜ, ಸಂಕೇತ, ಗುರುತು ಅನ್ನುವುದು ಸಾಮಾನ್ಯ ಅರ್ಥ. ಸರಿಯೋ ತಪ್ಪೋ, ನನಗೆ ತಿಳಿದಂತೆ, ಅದು ಹೀಗೆ ಅಂತ ಅನಿಸುತ್ತದೆ