ಕಂನುಡಿ - ಲೋಕಾರ್ಪಣೆ ಮತ್ತು ಪ್ರಾತ್ಯಕ್ಷಿಕೆ

ಕಂನುಡಿ - ಕನ್ನಡಕ್ಕೆ ಒಂದು ನಿದರ್ಶಕ ಪದ ಸಂಪಾದಕ

(OPOK! ಮತ್ತು OHOK! ನಿಯಮ ಮತ್ತು ನೆಲೆ-ತಿಳಿವುಗಳ ಆಧಾರದ ಮೇಲೆ)

Released by Shri T.S. Nagabharana

on Dec 15, 2022

Under Nimmallige Kannada Koota program

by Karnataka Cultural Association of Southern California

ನಮ್ಮ ನಡುವಿದ್ದ ನಾಡೋಜ

ನಮ್ಮ ನಡುವಿದ್ದ ನಾಡೋಜ

[ ಇಂದು, ಡಿಸೆಂಬರ ೨೮, ಕನ್ನಡದ ಹೊಸ ಬೆಳಕು ಮೂಡಿದ ದಿನ.  ಶ್ರೀನಿವಾಸ ಎಂಬ ಒಬ್ಬ ಹಳ್ಳಿಯ ಬಡ ಹುಡುಗ, ಹುಟ್ಟಿದ ದಿನ. ಎಲ್ಲ ಕಷ್ಟಗಳನ್ನೂ ಮೀರಿ, ತನ್ನ ಕಲಿಯುವ ಉತ್ಕಟತೆ, ಪುಸ್ತಕ ಪ್ರೇಮ, ಮತ್ತು ಹೊಸತನದ ಹಂಬಲಗಳಿಂದ ಒಬ್ಬ ಉತ್ಕೃಷ್ಟ ಸಂಶೋಧಕನಾಗಿ, ಸಂಶೋಧನೆಗೇ ಒಂದು ಹೊಸ ಆಯಾಮವನ್ನು ಜೋಡಿಸಿ, ನಾಡೋಜನಾಗಿ ಬೆಳೆದು ನಿಂತ ಕತೆ ಇದು.  ಕನ್ನಡ ಕಲಿಗಳಿಗಷ್ಟೆ ಅಲ್ಲ, ಎಲ್ಲರಿಗೂ ಸ್ಫೂರ್ತಿ ನೀಡುವ,  ಡಾ. ಶ್ರೀನಿವಾಸ ಹಾವನೂರರನ್ನು ಇದಕ್ಕಿಂತ ಹತ್ತಿರವಾಗಿ ಕಂಡು ಹೇಳಿದ ಕತೆ ನಿಮಗೆ ಬೇರೆ ಎಲ್ಲಿಯೂ ಸಿಗದು. – ಸಂ.]

ಶಂಖಣ್ಣನ ಹಣೆಬರಹ

ಚೆನ್ನುಡಿ

ಶಂಖಣ್ಣನ ಹಣೆಬರಹ

ಯಾವ ಮನೆತನದಲ್ಲಿ ಹುಟ್ಟಿದರೇನು? ಏನು ಕಲಿತರೇನು? ಏನು ಮಾಡಿದರೇನು?
ಮುಂದೆ ಏನಾಗುವುದು? ಎಲ್ಲವೂ ಹಣೆಬರಹ ಎಂದುಕೊಳ್ಳುವುದು ಸಾಮಾನ್ಯ. ವಿಶೇಷವಾಗಿ, ನಿರೀಕ್ಷಿಸಿದ್ದು ಆಗದಿದ್ದಾಗ, ಕೆಲವರಿಗೆ ಸಿರಿ, ಸಂಪತ್ತು, ಸೌಲಭ್ಯ, ಖ್ಯಾತಿ, ಹೀಗೆಲ್ಲ, ಪಾತ್ರರಿದ್ದರೂ ಸಿಗದಿದ್ದಾಗ, ಅಥವ ಅಪಾತ್ರರಿದ್ದರೂ ಅನಾಯಾಸವಾಗಿ ಸಿಕ್ಕಾಗ ಅಂದುಕೊಳ್ಳುವುದು ಹಣೆಬರಹ, ದೈವ, ಭಾಗ್ಯ, ಲಕ್ಕು, ಅಂತ! ಇದು ನಿಜವೋ, ಕೇವಲ ಸಮಾಧಾನಕ್ಕೋಸ್ಕರ ಹೇಳಿಕೊಳ್ಳುವ ಮಾತೋ? ಅಂತೂ ಒಂದಾನೊಂದು ಸಂದರ್ಭದಲ್ಲಿ ನಿಮಗೂ ಹೀಗೆ ಅನಿಸಿರಬಹುದು. ಎಲ್ಲವನ್ನೂ ಆದಂತೆ ಒಪ್ಪಿಕೊಂಡು ಕೂಡುವ ಜಾಯಮಾನ ಚಾಣಕ್ಯನದು ಅಲ್ಲ ಆದರೂ ಅವನು ಹೇಳಿದ್ದು ಹೀಗೆ:

ಹಳೆ-ಹೊಸ ತಲೆಮಾರುಗಳ ನಡುವೆ ದೀಪಾವಳಿ ಸಂಭ್ರಮ

ಹಳೆ-ಹೊಸ ತಲೆಮಾರುಗಳ ನಡುವೆ ದೀಪಾವಳಿ ಸಂಭ್ರಮ
*** ವಿವೇಕ ಬೆಟ್ಕುಳಿ


ಆಧುನಿಕತೆ ಬೆಳೆದಂತೆ ನಮ್ಮ ಸಂಪ್ರದಾಯ, ನಂಬಿಕೆ, ಕುಟುಂಬ ವ್ಯವಸ್ಥೆ ಈ ಎಲ್ಲವುಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಬದಲಾವಣೆಯೂ ಜಾಗತೀಕರಣದ ನಂತರದಲ್ಲಿ ಅತಿವೇಗದಿಂದ ಆಗುತ್ತಿರುವುದನ್ನು ಕಾಣಬಹುದಾಗಿದೆ. ಹಿಗೆಯೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಇಂದಿನ ಆಚರಣೆಗಳು ಕೇವಲ ಇತಿಹಾಸ ಏನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹಳೆ-ಹೊಸ ತಲೆಮಾರುಗಳ ಸಮ್ಮಿಲಿತ ಇಂದಿನ ಸಂದರ್ಭದಲ್ಲಿ ಹಬ್ಬಗಳನ್ನು ನಾವು ಸಂಭ್ರಮಿಸುತ್ತಿರುವುದು ವಿಶೇಷವಾಗಿದೆ.

ಚಾತಕ - ಕವಿಸಮಯ

ಚೆನ್ನುಡಿ

ಚಾತಕ - ಕವಿಸಮಯ

ಚಾತಕ, Clamator jacobinus, Jacobin cuckoo , pied cuckoo or pied crested cuckoo ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟ, ಒಂದು ಕೋಗಿಲ ಜಾತಿಯ ಪಕ್ಷಿ. ಇದಕ್ಕೆ ಶಾರಂಗ,  ಮಾತಂಗ,  ಸ್ತೋಕಕ ಎಂದು ಕೂಡ ಹೆಸರುಗಳು ಇವೆ.

ಕ್ಲಿಕ್ ಕ್ಲಿಕ್ ಗಣಕಪ್ಪ - ಕನ್ನಡ ಪದ್ಯ ಪಾಠ

ಕನ್ನಡ ಪದ್ಯ ಪಾಠ

ಕ್ಲಿಕ್‌ ಕ್ಲಿಕ್‌ ಗಣಕಪ್ಪ

ಇನ್ನೇನು ಬೇಸಿಗೆ ರಜೆ ಮುಗಿಯುತ್ತ ಬಂತು. ಶಾಲೆಯ ಹೊಸ ವರ್ಷ ಆರಂಭ. ಎಲ್ಲರಿಗೂ ಹಿಗ್ಗೋ ಹಿಗ್ಗು! ಮತ್ತೆ ಮೆಚ್ಚಿನ ಟೀಚರರ ಪಾಠ, ಹಳೆ ಗೆಳೆಯರ ಜೊತೆ ಆಟ; ಹೊಸ ಗೆಳೆಯರು, ಹೊಸ ಪುಸ್ತಕಗಳು, ಹೊಸ ಬಟ್ಟೆಗಳು ಎಲ್ಲಕ್ಕೂ ಹೊಸ ಹುರುಪು. ಈಗಂತೂ, ಹೊಸ ತರಗತಿಗೆ, ಹೊಸ ಗಣಕವನ್ನು ಕೊಳ್ಳುವುದು‌ ಸಾಮಾನ್ಯ ಆಗಿದೆ. ಗಣಕ ಅಂದರೆ ಕಂಪ್ಯೂಟರು, ಲ್ಯಾಪ್‌ ಟಾಪು, ಅಥವ ಟ್ಯಾಬ್ಲೆಟ್ಟು; ಎಷ್ಟೋ ಅಪ್‌ ಗಳನ್ನು ಅಳವಡಿಸಿಕೊಳ್ಳಬಹುದಾದ ಮೊಬೈಲ್‌ ಫೋನು ಕೂಡ ಆಗಬಹುದು. ಹೀಗೆ ಒಂದು ಗಣಕವನ್ನು ನಮ್ಮ ಪುಟ್ಟುವಿಗೆ ಅಪ್ಪ ಅಮ್ಮ ಕೊಡಿಸಿದಾಗ ಏನಾಯ್ತು? ಅವನು ಕಲಿತ ಪಾಠ ಏನು?

ಕಾಲ: ಪ್ರಕಿರಿತ ಪ್ರಜ್ಞಾನ

[ ಕಾಲ ಎಂದರೆ ಸದಾ ಉರುಳುತ್ತಿರುವ, ಮುನ್ನಡೆಯುತ್ತಿರುವ, ಮತ್ತು ಕಳೆಯುತ್ತಿರುವ ಸಮಯ, ಎಲ್ಲವನ್ನೂ ಆವರಿಸಿರುವ ವಿಷ್ಣು, ಎಲ್ಲವನ್ನೂ ಮೀರಿರುವ ಎಲ್ಲಕ್ಕೂ ಮೂಲ ಪರಮಾತ್ಮ ಶಿವ, ಅವ್ಯಕ್ತದಿಂದ ಹೊಡಕರಿಸಿದ ಕೃಷ್ಣ, ಮತ್ತು ಕಪ್ಪು ಎನ್ನುವ ಸಾಮಾನ್ಯ ಅರ್ಥಗಳು. ಶಿವ ಎಂದರೆ ಶುಭ್ರ, ಬಿಳಿ ಕೂಡ.
"ನೀ ಯಾರು ಹೇಳು" ಎಂದು ಅರ್ಜುನ ಕೇಳಿದಾಗ ಕೃಷ್ಣ ಹೇಳಿದ್ದು, " ಕಾಲೋಽಸ್ಮಿ, ಲೋಕಕ್ಷಯಕೃತ್ಪ್ರವೃದ್ಧಃ, ಲೋಕಗಳನಳಿಸುವ ಮಹಾನ್ ಕಾಲ ನಾನು."

ಮನ್ವಂತರದ ಮನುಜೆ: ಮೇರಿ ಕ್ಯೂರಿ

ನೊಬೆಲ್ ಬಿರುದಿಗೇ ಒಂದು ವಿಶಿಷ್ಟ, ವಿಶ್ವವ್ಯಾಪಿ ಪ್ರತಿಷ್ಠೆಯನ್ನು ತಂದು ಕೊಟ್ಟು, ಇತಿಹಾಸದಲ್ಲಿ ಅಮರಳಾಗಿ ನಿಂತ ಮೇರಿ ಕ್ಯೂರಿಯ ಜೀವನ್ಮಹಿಮೆಯು, ವಿಜ್ಞಾನಿಗಳಷ್ಟೇ ಅಲ್ಲ, ಸರ್ವರೂ, ಸರ್ವದಾ ಮೆಲುಕು ಹಾಕಬೇಕಾದಂಥ ಮಹಾರ್ಥಕ ಚರಿತೆ; “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಓದ್ದೀ?” ಎಂದರೆ “ಮೇರಿ ಕ್ಯೂರಿ ಕತೆ ಓದಿದೆ!” ಎಂಬ ಹರ್ಷೋದ್ಗಾರವನ್ನು ಹೊರಪಡಿಸುವ, ಹುರಿಯುಕ್ಕಿಸುವಂಥ ವಿಷಯ.

ಬರವಣಿಗೆಯಲ್ಲಿ ಮತ್ತು ಉಚ್ಚಾರದಲ್ಲಿ ಭಾಷಾ ಶುದ್ಧಿಯ ವಿಚಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಕೆ.ಟಿ. ಗಟ್ಟಿ ಚಿಂತನಶೀಲ ಬರಹಗಾರರು. ಭಾಷೆಯ ಕಲಿಕೆ, ಉಳಿವು, ಅಳಿವು, ಮತ್ತು ಬೆಳವಣಿಗೆಗಳಲ್ಲಿ ಇವರಿಗೆ ಆಸಕ್ತಿ. ಕನ್ನಡ ಕಲಿಗಾಗಿ ಬರೆದ ಈ ವಿಶೇಷ ಲೇಖನದಲ್ಲಿ ೧೧ ವಿಚಾರಗಳನ್ನು ಹರವಿದ್ದಾರೆ. ‘ನುರಿತ’ ಬರಹಗಾರರೂ ಸಾಮಾನ್ಯವಾಗಿ ಎಸಗುವ ಈ ಅನೇಕ ಪ್ರಮಾದಗಳನ್ನು ಕನ್ನಡ ಕಲಿಗಳು ಗಮನಿಸುವುದು ಅವಶ್ಯ. ನಿಮ್ಮ ವಿಚಾರ ೧೧ಏನು ತಿಳಿಸಿ

ಕಲಕಿದ ನೀರು

ಕಲಕಿದ ನೀರು 

ವಿಶ್ವೇಶ್ವರ ದೀಕ್ಷಿತ

೧೯೮೬ರಲ್ಲಿ ಬರೆದ ಈ ಕವನ ಅಮೆರಿಕನ್ನಡ ಸಂಚಿಕೆ ೧೫ರಲ್ಲಿ ಪ್ರಕಟವಾಗಿತ್ತು.

ಇಂದಿನ ಕೊರೋನ ಮಾರಿ, ಹಣದ ಉಬ್ಬರ ಅಬ್ಬರ, ಹಸಿವೆಯ ಕೊರೆತ,  ಮಾರುಕಟ್ಟೆಯ ಕುಸಿತ, ವಾಣಿಜ್ಯ ವಸಾಹತುಗಳು, ಕಲಹ ಯುದ್ಧಗಳು ಮತ್ತು  (ಬದುಕಿ ಉಳಿದರೆ) ಅವುಗಳ ಭೀತಿಯಲ್ಲಿ  ಬಾಳು, ಈ ಕವನವನ್ನು ನೆನಪಿಗೆ ತಂದವು, ಮತ್ತೆ. ಕಾಲ ಕಳೆದರೂ, ಮುಂದುವರೆದಂತೆಯೂ, ಪರಿಸ್ಥಿತಿ ಹೊಸತು ಆದರೂ ಭಯ ಭೀತಿಗಳೇ ಮನುಷ್ಯನ ಭವ ಭೂತಿ, ಇರವಿನ ಅರಿವು ಎನ್ನುವ ಸಂಶಯ ಬಾರದೆ ಇರದು.